show blocks helper
  • ಸುಯೋಧನಾ.. ಏಳು, ಕುರುವಂಶದ ರಾಜನಾಗಿ, ಕರ್ಣನಂಥವನ ಸ್ನೇಹಕ್ಕಾಗಿ, ರಣರಂಗದಲ್ಲಿಯೇ ವೀರ ಮರಣವನ್ನಪ್ಪಿದ ನಿನ್ನೊಡನೆ ಸಗ್ಗದಲ್ಲಿ ಸಖ್ಯಕ್ಕೆ ನಿನ್ನವರಲ್ಲೊಬ್ಬರನ್ನು ಆರಸಿಕೋ. ಕುರುಕ್ಷೇತ್ರದಲ್ಲಿ ನಡೆದ ಧರ್ಮ ಯುದ್ಧದಲ್ಲಿ ಭಾಗಿಯಾದ ಯಾರಾದರೂ ಸರಿ; ನಿನ್ನಿಚ್ಛೆಯಂತೆ ನಿನ್ನೊಡನೆ ಕರೆದುಕೋ.
  • ಕರ್ನಾಟಕದಲ್ಲಿ ನಾಟಕ ರಂಗಭೂಮಿಗೆ ಒಂದು ಸ್ಪಷ್ಟ ಆಕಾರ ಬಂದದ್ದು 1880ರ ಆಚೆ-ಈಚೆ. ಸಂಗೀತನಾಟಕವೆಂದೇ ಹೆಸರಾದ ಆ ಕಾಲದ ನಾಟಕಗಳು ಯಕ್ಷಗಾನ ರಂಗಭೂಮಿಯಿಂದ ಮೊದಲ ಪ್ರೇರಣೆಯನ್ನು ಪಡೆದವು ಎಂದು ಪ್ರತೀತಿ. ಸಂಸ್ಕೃತ ನಾಟಕಗಳು ಹಾಗೂ ಇಂಗ್ಲೀಷ್‌ನ 'ಅಪೇರಾ'ಗಳನ್ನೂ ಬಳಸಿಕೊಂಡದ್ದು ನಿಜ. ಮೊದಲ ದಿನಗಳ ಅನುಕರಣೆಯಿಂದ ಬಿಡಿಸಿಕೊಂಡು ನಾಟಕ ರಂಗಭೂಮಿಯು ಒಂದು ಸ್ವತಂತ್ರರೂಪ ತಾಳಲು ಸಾಧ್ಯವಾದದ್ದು ಆ ಕಾಲದ ಸುಪ್ರಸಿದ್ಧ ನಟರಾದ ವರದಾಚಾರ್ಯರಿಂದ.

Go to Top